HomeExclusive Newsಏಷ್ಯಾಕಪ್ ನಿಂದ ಭಾರತದ ಸ್ಟಾರ್ ಆಲ್ ರೌಂಡರ್ ಔಟ್: ಟಿ-20 ವಿಶ್ವಕಪ್ ಗೂ ದೊಡ್ಡ...

ಏಷ್ಯಾಕಪ್ ನಿಂದ ಭಾರತದ ಸ್ಟಾರ್ ಆಲ್ ರೌಂಡರ್ ಔಟ್: ಟಿ-20 ವಿಶ್ವಕಪ್ ಗೂ ದೊಡ್ಡ ಹೊಡೆತ

ಏಷ್ಯಾ ಕಪ್ ನಲ್ಲಿ ಪಾಕ್ ಹಾಗೂ ಹಾಂಕಾಂಗ್ ವಿರುದ್ದ ಗೆದ್ದು ಬೀಗಿ ಸೂಪರ್ 4 ಹಂತಕ್ಕೆ ತಲುಪಿರುವ ಟೀಮ್ ಇಂಡಿಯಾಕ್ಕೆ ದೊಡ್ಡ ಹೊಡೆತವೊಂದು ಬಿದ್ದಿದೆ. ತಂಡದ ಸ್ಟಾರ್ ಆಲ್ ರೌಂಡರ್ ರವೀಂದ್ರ ಜಡೇಜಾ ಏಷ್ಯಾಕಪ್ ನ ಉಳಿದ ಪಂದ್ಯಗಳಿಂದ ಹೊರ ಬಿದ್ದಿದ್ದಾರೆ.


ಜಡೇಜಾ ಅವರ ಬಲ ಮೊಣಕಾಲಿಗೆ ಗಾಯವಾಗಿದ್ದು, ಅವರನ್ನು ಇದು ಹೆಚ್ಚು ಕಾಡುತ್ತಿದೆ. ಹಾಗಾಗಿ ಅಖಿಲ ಭಾರತ ಕ್ರಿಕೆಟ್ ಆಯ್ಕೆ ಸಮಿತಿಯು ಏಷ್ಯಾಕಪ್ ನ ಉಳಿದ ಪಂದ್ಯಕ್ಕೆ ಜಡೇಜಾ ಬದಲಿಗೆ ಅಕ್ಷರ್ ಪಟೇಲ್‌ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಬಿಸಿಸಿಐ ಹೇಳಿದೆ.


ಟಿ-20 ವಿಶ್ವಕಪ್ ಮುಂದಿನ ತಿಂಗಳಿನಿಂದ ನಡೆಯಲಿದ್ದು, ಈ ಸಮಯದಲ್ಲಿ ಜಡೇಜಾ ಅವರು ಗಾಯಗೊಂಡಿರುವುದು ತಂಡಕ್ಕೆ ದೊಡ್ಡ ಆಘಾತ ನೀಡಿದೆ. ಅವರು ವಿಶ್ವಕಪ್ ತಂಡಕ್ಕೆ ಆಯ್ಕೆಗೊಳ್ಳುತ್ತಾರೋ, ಇಲ್ವೋ ಅನ್ನೋದು ಅನುಮಾನ.


ಇನ್ನು ಜಡೇಜಾ ಪಾಕಿಸ್ತಾನ ಹಾಗೂ ಹಾಂಕಾಂಗ್ ವಿರುದ್ದ ಜಡ್ಡು ಆಲ್ ರೌಂಡ್ ಆಟವನ್ನಾಡಿ ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದ್ದರು.

RELATED ARTICLES

Most Popular

Share via
Copy link
Powered by Social Snap