HomeSportsರಣಜಿ ಸೆಮಿಫೈನಲ್:‌ ದ್ವಿಶತಕ ಬಾರಿಸಿ ಮಿಂಚಿದ ಕನ್ನಡದ ಮಾಯಾಂಕ್‌

ರಣಜಿ ಸೆಮಿಫೈನಲ್:‌ ದ್ವಿಶತಕ ಬಾರಿಸಿ ಮಿಂಚಿದ ಕನ್ನಡದ ಮಾಯಾಂಕ್‌

ಸೌರಾಷ್ಟ್ರ ವಿರುದ್ಧದ ರಣಜಿ ಸೆಮಿಫೈನಲ್‌ ಪಂದ್ಯದಲ್ಲಿ ಕರ್ನಾಟಕ ಬೃಹತ್‌ ಮೊತ್ತವನ್ನು ದಾಖಲಿಸಿ ಉತ್ತಮ ಸ್ಥಿರಿಯಲ್ಲಿದೆ.

ಕರ್ನಾಟಕ ತಂಡ ಬುಧವಾರ 229 ಕ್ಕೆ 5 ವಿಕೆಟ್‌ ಕಳೆದುಕೊಂಡಿತ್ತು. ಆದರೆ ಒಂದು ಕಡೆಯಿಂದ ತಂಡಕ್ಕೆ ಕಪ್ತಾನ ಮಾಯಾಂಕ್‌ ಅಗರ್ವಾಲ್‌ ಭರವಸೆಯಿಂದ ಬ್ಯಾಟ್‌ ಬೀಸುತ್ತಿದ್ದರು. ಗುರುವಾರ 407 ರನ್‌ ಗಳಿಸಿ ಆಲೌಟಾಗಿದೆ.
ಟೀಮ್‌ ಇಂಡಿಯಾದಲ್ಲಿ ಆರಂಭಿಕರಾಗಿ ಟೆಸ್ಟ್‌ ತಂಡದಲ್ಲೂ ಕಾಣಿಸಿಕೊಂಡಿದ್ದ ಮಾಯಾಂಕ್‌ ಆ ಬಳಿಕ ಇತ್ತೀಚೆಗೆ ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡದೇ ತಂಡದಿಂದ ಡ್ರಾಪ್‌ ಔಟ್‌ ಆಗಿದ್ದರು. ಮತ್ತೆ ಹೇಗಾದರೂ ಮಾಡಿ ಸ್ಥಾನವನ್ನು ಪಡೆದುಕೊಂಡು ತಂಡದಲ್ಲಿ ಮಿಂಚಬೇಕೆನ್ನುವ ಹಟ ತೊಟ್ಟಿರುವ ಮಾಯಾಂಕ್‌ ರಣಜಿಯಲ್ಲಿ ಸಫಲರಾಗಿದ್ದಾರೆ.


ಒಟ್ಟು 429 ಎಸೆತಗಳನ್ನು ಎದುರಿಸಿ, 28 ಬೌಂಡರಿ, 6 ಸಿಕ್ಸರ್‌ಗಳನ್ನು ಬಾರಿಸಿ, ತಂಡ 400 ಗಡಿ ದಾಟಲು ಪ್ರಮುಖ ರೂವಾರಿಯಾದರು.

ಇದಕ್ಕೆ ಜವಾಬು ಕೊಟ್ಟು ಬ್ಯಾಟಿಂಗ್‌ ಆರಂಭಿಸಿರುವ ಸೌರಾಷ್ಟ್ರ 76 ಕ್ಕೆ ವಿಕೆಟ್‌ ವಿಕೆಟ್‌ ಕಳೆದುಕೊಂಡಿದೆ.

RELATED ARTICLES

Most Popular

Share via
Copy link
Powered by Social Snap