HomeExclusive News'ಮಾದೇವ'ನಿಗಾಗಿ ಖಡಕ್ ವಿಲನ್ ಆದ ಶ್ರೀನಗರ ಕಿಟ್ಟಿ

‘ಮಾದೇವ’ನಿಗಾಗಿ ಖಡಕ್ ವಿಲನ್ ಆದ ಶ್ರೀನಗರ ಕಿಟ್ಟಿ

‘ರಾಬರ್ಟ್’ ಸಿನಿಮಾದಲ್ಲಿ ‌ ಜೊತೆಯಾಗಿ ಕಾಣಿಸಿಕೊಂಡು ಪ್ರೇಕ್ಷಕರಿಗೆ ಸಿಕ್ಕಾಪಟ್ಟೆ ಇಷ್ಟವಾಗಿದ್ದ ರಾಘವ್ – ತನು ಪಾತ್ರಗಳು ಮತ್ತೆ ಒಂದಾಗಿ ಕಾಣಿಸಿಕೊಳ್ಳಲಿದೆ.



ವಿನೋದ್ ಪ್ರಭಾಕರ್ – ಸೋನಲ್ ಮೊಂಥೆರೋ ಜೊತೆಯಾಗಿ ಕಾಣಿಸಿಕೊಳ್ಳುತ್ತಿರುವ ‘ಮಾದೇವ’ ಚಿತ್ರ ತಂಡ ಚಿತ್ರೀಕರಣದಲ್ಲಿ ಬ್ಯುಸಿಯಾಗಿದೆ.


‘ಖಾಕಿ’ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಿದ್ದ ನವೀನ್ ಬಿ. ರೆಡ್ಡಿ ಈಗ ಮಾಸ್ ಎಲಿಮೆಂಟ್ ವುಳ್ಳ ಮಾದೇವ ಚಿತ್ರಕ್ಕೆ ‌ನಿರ್ದೇಶನ ಮಾಡುತ್ತಿದ್ದು, ಈ ಚಿತ್ರದ ಬಗ್ಗೆ ಮತ್ತೊಂದು ಆಪ್ಡೇಟ್ ಬಂದಿದೆ.


80 ದಶಕದ ಕಥೆಯಲ್ಲಿ ನಾಯಕ – ನಾಯಕಿ ಇಬ್ಬರು ಡಿಫೆರೆಂಟ್ ಆಗಿ ಕಾಣಿಸಿಕೊಳ್ಳಲಿದ್ದು, ಚಿತ್ರದಲ್ಲಿ ವಿಲನ್ ಕೂಡ ಖಡಕ್ ಆಗಿ ಕಾಣಿಸಿಕೊಳ್ಳಲಿದ್ದಾರೆ.


ಚಿತ್ರದಲ್ಲಿ ನಟ ಶ್ರೀನಗರ ಕಿಟ್ಟಿ ಸಮುದ್ರ ಎಂಬ ಪಾತ್ರದಲ್ಲಿ ವಿಲನ್ ರೋಲ್ ನಲ್ಲಿ ಮಿಂಚಲಿದ್ದಾರೆ.


ಉಳಿದಂತೆ ಚಿತ್ರದಲ್ಲಿ ಶ್ರುತಿ, ಅಚ್ಯುತ್ ಕುಮಾರ್,ಕಾಕ್ರೋಚ್ ಸುಧಿ ಮುಂತಾದವರು ನಟಿಸಿದ್ದಾರೆ.


ಶಿವಮೊಗ್ಗ, ಧಾರವಾಡ, ಹೈದರಾಬಾದ್ ಮುಂತಾದ ಕಡೆ ಚಿತ್ರೀಕರಣ ನಡೆಸಲು ಪ್ಲ್ಯಾನ್ ಮಾಡಿಕೊಂಡಿದೆ‌ ಚಿತ್ರ ತಂಡ.

RELATED ARTICLES

Most Popular

Share via
Copy link
Powered by Social Snap