“ದುನಿಯಾ” ಎನ್ನುವ ಕನ್ನಡ ಆಲ್ಬಂ ಸಾಂಗ್ ನ ಪ್ರೋಮೋ ವನ್ನು ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಿಲೀಸ್ ಮಾಡಿ ತಂಡಕ್ಕೆ ಶುಭಕೋರಿದರು.
“ದುನಿಯಾ” ಆಲ್ಬಂ ಸಾಂಗಿನ ಸಾಹಿತ್ಯವನ್ನು ಕವಿರತ್ನ ವಿ.ನಾಗೇಂದ್ರ ಪ್ರಸಾದ್ ಬರೆದಿದ್ದು, ವಿಜಯ್ ಪ್ರಕಾಶ್ ಅವರು ಸುಮಧುರವಾಗಿ ಹಾಡಿದ್ದಾರೆ.
ಸಲೀಂ ಸುಲೇಮಾನ್ ಅವರು ಹಾಡಿಗೆ ಸಂಗೀತವನ್ನು ನೀಡಿದ್ದಾರೆ. ಆಲ್ಬಂ ಸಾಂಗ್ ನ ತಂಡ “ದುನಿಯಾ”ದ ಪ್ರೋಮೋವನ್ನು ಸಿಎಂ ಅವರ ಕೈಯಿಂದ ರಿಲೀಸ್ ಮಾಡಿಸಿದ್ದಾರೆ.
ಈ ವೇಳೆ ಸಚಿವರಾದ ಮುರಗೇಶ್ ನಿರಾಣಿ, ಡಾ. ಸುಧಾಕರ್, ನಾಗೇಂದ್ರ ಪ್ರಸಾದ್, ವಿಜಯ್ ಪ್ರಕಾಶ್ ಸುಲೇಮಾನ್ ಅವರು ಉಪಸ್ಥಿತರಿದ್ದರು.
ಇದೇ.ಡಿ.16 ರಂದು ಯೂಟ್ಯೂಬ್ ನಲ್ಲಿ ಹಾಡು ರಿಲೀಸ್ ಆಗಲಿದೆ.

