HomeNews'ಅಬ್ಬರ' ಟ್ರೇಲರ್ ಗೆ ಮೆಚ್ಚುಗೆ: ನ.18 ಚಿತ್ರ ರಿಲೀಸ್

‘ಅಬ್ಬರ’ ಟ್ರೇಲರ್ ಗೆ ಮೆಚ್ಚುಗೆ: ನ.18 ಚಿತ್ರ ರಿಲೀಸ್

ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಈಗ ‘ಅಬ್ಬರ’ದಲ್ಲಿ ಬ್ಯುಸಿಯಾಗಿದ್ದಾರೆ. ಇದೇ ನವೆಂಬರ್ 18 ರಿಂದ ರಾಜ್ಯಾದ್ಯಂತ ಆ್ಯಕ್ಷನ್ ಅವತಾರದಲ್ಲಿ ಅಬ್ಬರಿಸಲು ರೆಡಿಯಾಗಿದ್ದಾರೆ.

ಈ ಹಿಂದೆ ‘ಟೈಸನ್’, ‘ಕ್ರ್ಯಾಕ್’ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಿದ್ದ ಕೆ. ರಾಮ್‌ ನಾರಾಯಣ್ ‘ಅಬ್ಬರ’ವನ್ನು ಡೈರೆಕ್ಟ್ ಮಾಡಿದ್ದಾರೆ. ಅಂಡ್ ಎಂ.ಮೂವೀಸ್ ಲಾಂಛನದಲ್ಲಿ ಬಸವರಾಜ್ ಮಂಚಯ್ಯ ಅವರು ನಿರ್ಮಿಸಿದ್ದಾರೆ.

ಟ್ರೇಲರ್ ನ್ನು ಹಿರಿಯ ನಟ ದೇವರಾಜ್ ಅವರು ಬಿಡುಗಡೆ ಮಾಡಿ ಶುಭಕೋರಿದರು.

ನಿರ್ದೇಶಕ ರಾಮ್‌ ನಾರಾಯಣ್ ಮಾತಾನಾಡಿ, ಇದೇ ತಿಂಗಳ 18ಕ್ಕೆ ಅಬ್ಬರ ಬಿಡುಗಡೆಯಾಗುತ್ತಿದೆ. ಎಕ್ಸೈಟ್‌ಮೆಂಟ್ ಜೊತೆಗೆ ಆತಂಕವೂ ಇದೆ. ಈ ಸೀನ್‌ಗೆ, ಈ ಫೈಟ್‌ಗೆ, ಈ ಹಾಡಿಗೆ ಜನ ಏನೆನ್ನಬಹುದು ಎಂಬ ಕುತೂಹಲವಿದೆ. ಆದರೆ ಸಿನಿಮಾ ಗೆದ್ದೇಗೆಲ್ಲುತ್ತೆ ಎಂಬ ಭರವಸೆಯಿದೆ. ಅಬ್ಬರ ಡೇ ಒನ್‌ನಿಂದ ಅಬ್ಬರವಾಗೇ ಬರುತ್ತಿದೆ. ಆರಂಭದಲ್ಲಿ ಟೈಟಲ್‌ನ್ನು ಎಸ್.ಗೋವಿಂದ್ ಅವರು ನಮಗೆ ಬಿಟ್ಟುಕೊಟ್ಟರು.
ಪ್ರತಿ ಹಂತದಲ್ಲೂ ಅಂದುಕೊಂಡದ್ದಕ್ಕಿಂತ ಚೆನ್ನಾಗಿಯೇ ಚಿತ್ರ ಬಂದಿದೆ. ಹಾಡಿನ ಸಮಯದಲ್ಲಿ ನಿಮಿಕಾಗೆ ಕಾಲು
ಪೆಟ್ಟಾಗಿದ್ದರೂ ತೋರಿಸಿಕೊಳ್ಳದೆ ಅಭಿನಯಿಸಿದರು. ಚಿತ್ರದ ಟೈಟಲನ್ನು ಶಿವರಾಜ್‌ಕುಮಾರ್ ರಿಲೀಸ್ ಮಾಡಿದ್ದರು.
ಈಗ ಟ್ರೈಲರನ್ನು ದೇವರಾಜ್ ರಿಲೀಸ್ ಮಾಡಿದ್ದಾರೆ. ನಿರ್ಮಾಪಕರ ಹೆಸರೂ ಬಸವರಾಜ್, ಹೀಗೆ ನಮ್ಮ ಸಿನಿಮಾಗೆ ರಾಜ್ ಎನ್ನುವ ಹೆಸರು ಶಕ್ತಿಯಾಗಿ ನಿಂತಿದೆ. ರವಿಶಂಕರ್ ಅತ್ಯದ್ಭುತವಾಗಿ ಅಭಿನಯಿಸಿದ್ದಾರೆ, ಅವರಿಗೆ 2 ಶೇಡ್ಸ್ ಇದೆ. ಶೋಭರಾಜ್, ಶಂಕರ್ ಅಶ್ವಥ್, ವಿಕ್ಟರಿವಾಸು, ಕೋಟೆ ಪ್ರಭಾಕರ್ ತುಂಬಾ ಚೆನ್ನಾಗಿ ಆಕ್ಟ್ ಮಾಡಿದ್ದಾರೆ. ಅಲ್ಲದೆ ರವಿ ಬಸ್ರೂರು ಒಳ್ಳೆಯ ಹಾಡುಗಳನ್ನು ಮಾಡಿಕೊಟ್ಟಿದ್ದಾರೆ. ಜೆ.ಕೆ.ಗಣೇಶ್ ಕ್ಯಾಮೆರಾವರ್ಕ್ ನಿಭಾಯಿಸಿದ್ದು, ಮೂವರು ನಾಯಕಿಯರೂ ಪೈಪೋಟಿಗೆ ಬಿದ್ದವರಂತೆ ಅಭಿನಯಿಸಿದ್ದಾರೆ
ಎಂದರು.

ನಿರ್ಮಾಪಕ ಬಸವರಾಜ್ ಮಂಚಯ್ಯ ಮಾತನಾಡಿ, ಕೋವಿಡ್ ಆಗತಾನೇ ಮುಗಿದಿತ್ತು. ಹಾಡುಗಳನ್ನು ಫಾರಿನ್‌ನಲ್ಲಿ ಶೂಟ್ ಮಾಡಲು ಪ್ರಜ್ವಲ್ ಒಪ್ಪಿದರು. 2 ಹಾಡುಗಳನ್ನು ಥೈಲ್ಯಾಂಡ್‌ನಲ್ಲೇ
ಶೂಟ್ ಮಾಡಿದ್ದೇವೆ. ತೆರೆಯ ಹಿಂದೆ ನಾವಿದ್ದರೂ, ತೆರೆಯಮುಂದೆ ಅವರೆಲ್ಲ ಪಟ್ಟಿರುವ ಶ್ರಮವನ್ನು ಜನರೆಲ್ಲ ನೋಡುತ್ತಾರೆ. ತಂದೆ ಒಂದು ಒಂದು ತಪ್ಪು ಮಾಡ್ತಾನೆ, ಅದನ್ನು ಸರಿಪಡಿಸುವುಕ್ಕೆ ಹೋಗಿ ಮತ್ತೊಂದು ತಪ್ಪು ಮಾಡ್ತಾನೆ. ನಂತರ ಮಗ ಅದನ್ನು ಹೇಗೆ ಸರಿಪಡಿಸ್ತಾನೆ ಅನ್ನೋದೇ ಈ ಚಿತ್ರದ
ಕಥೆ. ಹಾಗಾಗಿ ನಾಯಕನ ತಂದೆ ದೇವರಾಜ್ ಅವರ ಕೈಲೇ ಟ್ರೈಲರ್ ಲಾಂಚ್ ಮಾಡಿಸಿದ್ದೇವೆ. ಪಿಆರ್‌ಓ ನಾಗೇಂದ್ರ ಅವರು ಈಥರ ಮಾಡಿ ಎಂದು ಸಲಹೆ ಕೊಟ್ಟರು ಎಂದು ಹೇಳಿದರು.

ದೇವರಾಜ್ ಮಾತನಾಡಿ ಟ್ರೈಲರ್ ಹಾಡುಗಳು ತುಂಬಾ ಚೆನ್ನಾಗಿ ಬಂದಿವೆ. ಚಿತ್ರದ ಮೂವರು ನಾಯಕಿಯರು ಮಗನ ಬಗ್ಗೆ ಒಳ್ಳೆಯ ಮಾತುಗಳನ್ನು ಹೇಳಿದಾಗ ಒಬ್ಬ ತಂದೆಯಾಗಿ ನನಗೆ ತುಂಬಾ ಖುಷಿಯಾಯ್ತು. ಕನ್ನಡ ಚಿತ್ರರಂಗಕ್ಕೀಗ ಶುಕ್ರದೆಸೆ ಬಂದಿದೆ. ಇಡೀ ದೇಶ ಹೊಗಳುತ್ತಿದೆ. ರಾಮ ನಾರಾಯಣ್ ಜೊತೆ ನಾನೂ ಕೆಲಸ ಮಾಡಿದ್ದೇನೆ. ಒಬ್ಬ ಸಾಹಿತಿಯ ಕೈಲಿ ಬಂದಿರುವ ಡೈಲಾಗ್‌ಗಳು ತುಂಬಾ ಚೆನ್ನಾಗಿರುತ್ತೆ. ಅವರು ಆಡೋ ಮಾತಲ್ಲಿ ನಾಟಕೀಯತೆ ಕಾಣಲಿಲ್ಲ ಎಂದು ಹೇಳಿದರು,

ನಾಯಕ ಪ್ರಜ್ವಲ್ ಮಾತಾಡುತ್ತ ಚಿತ್ರದ ರಿಲೀಸ್ ಹತ್ತಿರವಾಗ್ತಿದ್ದಂತೆ ಎಕ್ಸೈಟ್‌ಮೆಂಟ್ ಇರುತ್ತೆ, ಆದರೆ ಈ ಸಿನಿಮಾ ಮಾಡಿದಮೇಲೆ
ನೆಮ್ಮದಿ ಕಾಣಿಸ್ತಿದೆ. ಚಿತ್ರ ಇಷ್ಟು ಚೆನ್ನಾಗಿ ಬರಲು ಇಡೀತಂಡ ಹಾಕಿದ ಎಫರ್ಟ್ ಕಾರಣ. ಚಿತ್ರದಲ್ಲಿ ನನಗೆ ಮೂರು ವಿಭಿನ್ನವಾದ ಪಾತ್ರಗಳಿದ್ದು, 5 ರೀತಿಯಲ್ಲಿ ಕಾಣಿಸಿಕೊಳ್ಳುತ್ತೇನೆ. ಒಂದೇದಿನ ಮೂರೂ
ಪಾತ್ರಗಳನ್ನು ಮಾಡಬೇಕಾಗಿತ್ತು. ಕಾಮಿಡಿ, ಎಂಟರ್‌ಟೈನಿಂಗ್ ಜೊತೆಗೆ ಒಂದು ರಿವೆಂಜ್ ಥಾಟ್ ಚಿತ್ರದಲ್ಲಿದೆ.
ಅದು ಚಿತ್ರದ ಕೊನೇವರೆಗೂ ಪ್ರೇಕ್ಷಕರಲ್ಲಿ ಕುತೂಹಲ ಕೆರಳಿಸುತ್ತಲೇ ಇರುತ್ತದೆ. ನಾನು
ನಡೆಯುವ ದಾರಿ ಹೀಗೇ ಇರಬೇಕು ಅಂದುಕೊಂಡಿರುತ್ತೇವೆ. ಆದರೆ, ಅದು ಹೋಗ್ತಾ ಹೋಗ್ತಾ ಕಳೆದುಹೋಗುತ್ತದೆ. ಮನುಷ್ಯ ಯಾವಾಗಲೂ ಜಾಗೃತನಾಗಿರಬೇಕು ಎನ್ನುವುದೇ ಚಿತ್ರದ ಸಂದೇಶ ಎಂದು ಹೇಳಿದರು.

ಈ ಚಿತ್ರದಲ್ಲಿ ಪ್ರಜ್ವಲ್ ಜೊತೆ ರಾಶಿಪೊನ್ನಪ್ಪ, ನಿಮಿಕಾ ರತ್ನಾಕರ್ ಹಾಗೂ ಲೇಖಾಚಂದ್ರ ನಾಯಕಿಯರಾಗಿ ಅಭಿನಯಿಸಿದ್ದಾರೆ.

RELATED ARTICLES

Most Popular

Share via
Copy link
Powered by Social Snap